Darshan Imprisonment: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸ್ಥಿತಿ ಹೇಗಿದೆ…? ಬೇಸರ ಹೊರಹಾಕಿದ ಅಭಿಮಾನಿಗಳು.

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸ್ಥಿತಿ ಹೇಗಿದೆ...?

Darshan Imprisonment Update: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಹಾಗೂ 10 ಆರೋಪಿಗಳನ್ನು ನ್ಯಾಯ್ಯಂಗ ಬಂಧನದಲ್ಲಿ ಇರಿಸಲಾಗಿತ್ತು. ಇನ್ನು ಕಸ್ಟಡಿಯಲ್ಲಿದ್ದ ದರ್ಶನ್ ಹಾಗೂ 4 ಮಂದಿ ಆರೋಪಿಗಳನ್ನು ನಿನ್ನೆ ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ದರ್ಶನ್ ಸೇರಿದಂತೆ ನಾಲ್ಕು ಆರೋಪಿಗಳಿಗೆ ನ್ಯಾಯಾಂಗ ಬಂಧನ ಆದೇಶಿಸಿದೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳು ಕೂಡ ನ್ಯಾಯಾಂಗ ಬಂದಲ್ಲಿದ್ದಾರೆ. ನಟ ದರ್ಶನ್ ಗೆ ಕೋರ್ಟ್ ಜುಲೈ 4 ರ ವರೆಗೆ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿದೆ. ಇನ್ನು ಸೆಲೆಬ್ರೆಟಿ ಜೀವನ ನಡೆಸುತ್ತಿರುವ ದರ್ಶನ್ ಸದ್ಯ ಸಾಮಾನ್ಯರಂತೆ ಜೈಲಿನಲ್ಲಿ ಇರಬೇಕಾಗಿದೆ.

Darshan Imprisonment Update
Image Credit: New Indian Express

ಪರಪ್ಪನ ಆಗ್ರಹಕಾರದಲ್ಲಿ ದರ್ಶನ್ ಸ್ಥಿತಿ ಹೇಗಿದೆ…?
ಪರಪ್ಪನ ಅಗ್ರಹಾರ ಜೈಲಿನ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ದರ್ಶನ್ ಅವರಿಗೆ ಈಗಾಗಲೇ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ. ದರ್ಶನ್ ಅವರಿಗೆ 6106 ರಿಮಾಂಡ್ ಖೈದಿ ಸಂಖ್ಯೆ ನೀಡಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಧನರಾಜ್, ವಿನಯ್ ಮತ್ತು ಪ್ರದುಶ್ ಅವರಿಗೆ 6107, 6108 ಮತ್ತು 6109 ಸಂಖ್ಯೆಗಳನ್ನು ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ಮೂರು ವಿಶೇಷ ಬ್ಯಾರಕ್ ಗಳಿದ್ದು, ಇತರೆ ಕೈದಿಗಳಿಂದ ಅಪಾಯದಲ್ಲಿರುವ ಆರೋಪಿಗಳನ್ನು ಈ ಬ್ಯಾರಕ್ ನಲ್ಲಿ ಇರಿಸಲಾಗಿದೆ.ದರ್ಶನ್ ಅವರನ್ನು ಈಗ ಮೂರನೇ ಬ್ಯಾರಕ್‌ ನಲ್ಲಿ ಇರಿಸಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ಮೂರು ವಿಶೇಷ ಬ್ಯಾರಕ್ ಗಳಿದ್ದು, ಇತರೆ ಕೈದಿಗಳಿಂದ ಅಪಾಯದಲ್ಲಿರುವ ಆರೋಪಿಗಳನ್ನು ಈ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಇದೀಗ ದರ್ಶನ್ ಅವರನ್ನು ಮೂರನೇ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಪವಿತ್ರಾ ಗೌಡ ಅವರಿಗೆ ಜೈಲು ಅಧಿಕಾರಿಗಳು ವಿಚಾರಣಾಧೀನ ಕೈದಿ ನಂಬರ್ 6024 ನೀಡಿದ್ದಾರೆ. ನಟ ದರ್ಶನ್ ಅವರ ಬಳಿ ಪಾರದರ್ಶಕ ತನಿಖೆ ನಡೆಸಲು ರಾಜ್ಯ ಸರ್ಕಾರ ಈ ಬಾರಿ ದೃಢ ನಿರ್ಧಾರ ಕೈಗೊಂಡಿದೆ.

Darshan Imprisonment Latest News Update
Image Credit: New Indian Express

ಬೇಸರ ಹೊರಹಾಕಿದ ಅಭಿಮಾನಿಗಳು
ಪ್ರಕರಣದಲ್ಲಿ ಯಾರೊಬ್ಬರೂ ಒತ್ತಡ ಹೇರದಂತೆ ಸಚಿವರಿಗೆ ಸಿಎಂ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಪೊಲೀಸರು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ವಕೀಲರು ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಆರೋಪಿಗಳೆಲ್ಲ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇನ್ನೇನು ಕೆಲವೇ ದಿನದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ನೀಡಲಿದೆ. ಜೈಲು ಸೇರಿರುವ ದರ್ಶನ್ ಸ್ಥಿತಿ ಕಂಡು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.

Join Nadunudi News WhatsApp Group

Actor Darshan Case News
Image Credit: Times Of India

Join Nadunudi News WhatsApp Group