Dwarakanath Guruji: ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ, ಭವಿಷ್ಯ ನುಡಿದ ಗುರುಗಳು.
ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಅನ್ನುವುದರ ಬಗ್ಗೆ ಭವಿಷ್ಯವನ್ನ ಹೇಳಿದ್ದಾರೆ ದ್ವಾರಕಾನಾಥ್ ಗುರೂಜಿ.
Next CM In Karnataka: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದೆ. ಪಕ್ಷಕಗಳ ನಾಯಕರ ಪ್ರಚಾರ ಹೆಚ್ಚಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಮೂರೂ ದಿನ ಮಾತ್ರ ಉಳಿದಿದೆ.
ಈ ನಡುವೆ ಪಕ್ಷಗಳ ಪ್ರಚಾರದಲ್ಲಿ ಪೈಪೋಟಿ ಹೆಚ್ಚಾಗಿ ಕಾಣುತ್ತಿದೆ. ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಜೋತಿಷಿಗಳು ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ.
![Dwarkanath has predicted who will be the next Chief Minister](https://nadunudi.in/wp-content/uploads/2023/05/dwarakanath-astrology.png)
ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದಕ್ಕೆ ರಾಶಿ ಭವಿಷ್ಯ ನುಡಿದ ಗುರೂಜಿ
ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಭವಿಷ್ಯವನ್ನು ಜೋತಿಷಿಗಳು ನುಡಿಯುತ್ತಿದ್ದಾರೆ.
ಬರೆದಿಟ್ಟುಕೊಳ್ಳಿ ಮೇ ಹದಿನೆಂಟರಂದು ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ ಎನ್ನುವ ಖಚಿತ ವಿಶ್ವಾಸದ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಕಡೆ ಅವರ ತಂದೆ ದೇವೇಗೌಡ ಅವರು ಈ ಬಾರಿ ನನ್ನ ಮಗನೆ ಮುಂದಿನ ಸಿಎಂ ಎಂದು ಹೇಳುತ್ತಿದ್ದಾರೆ. ಈ ನಡುವೆ ಖ್ಯಾತ ಜೋತಿಷಿ ಒಬ್ಬರು ಕುಮಾರಸ್ವಾಮಿ ಅವರ ರಾಶಿ ಫಲಗಳ ಬಗೆ ಹೇಳಿದ್ದಾರೆ.
![Dwarkanath spoke of the future saying that the expectation of Kumaraswamy becoming the next Chief Minister is high](https://nadunudi.in/wp-content/uploads/2023/05/dwarakanath-guruji.png)
ಕುಮಾರಸ್ವಾಮಿ ಅವರ ರಾಶಿ ಭವಿಷ್ಯ ನುಡಿದ ಡಾ. ದ್ವಾರಾಕನಾಥ್ ಗುರೂಜಿ
ಖ್ಯಾತ ಜ್ಯೋಷಿಯಾದ ಡಾ. ದ್ವಾರಾಕನಾಥ್ ಗುರೂಜಿಯವರು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, ಪ್ರಸಕ್ತ ಹೊತ್ತಿನಲ್ಲಿ ಅತ್ಯಂತ ಉತ್ತಮ ಜಾತಕ ಎನ್ನುವುದಿದ್ದರೆ ಅದು ಕುಮಾರಸ್ವಾಮಿಯವರದ್ದು. ಆದ್ರಾ ನಕ್ಷತ್ರ, ಮಿಥುನ ರಾಶಿ, ಈ ರಾಶಿಗೆ ಏಕಾದಶದಲ್ಲಿ ಗುರುವಿದ್ದಾನೆ, ಹಾಗಾಗಿ ಅವರ ಜಾತಕ ಬಹಳ ಉತ್ತಮವಾಗಿದೆ ಎಂದು ಗುರೂಜಿಗಳು ಹೇಳಿದ್ದಾರೆ.
![Dwarkanath Guruji told who is the most likely politician to become the next Chief Minister](https://nadunudi.in/wp-content/uploads/2023/05/karnataka-next-cm-predict.png)
ಮಾಧ್ಯಮಗಳ ಜೊತೆಗೆ ಮಾತನಾಡಿದ ಗುರೂಜಿ, ಕುಮಾರಸ್ವಾಮಿ ಅವರ ರಾಶಿಫಲ ಕುಮಾರಸ್ವಾಮಿಯವರನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ರಾಹು ಉತ್ತಮ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಅವರು ತಾಳ್ಮೆಯಿಂದ ಇರಬೇಕು.
ಬೇಕಾಬಿಟ್ಟಿ ನಿರ್ಧಾರ ಅಥವಾ ಹೇಳಿಕೆಯನ್ನು ನೀಡಬಾರದು ಎನ್ನುವ ಸಲಹೆಯನ್ನು ಗುರೂಜಿ ನೀಡಿದ್ದಾರೆ. ಈ ಮೂಲಕ ಗುರೂಜಿ ಕುಮಾರಸ್ವಾಮಿ ಅವರೇ ಈ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ಸೂಚನೆ ನೀಡಿದ್ದಾರೆ.