Darshan Emotional: ಹೆಂಡತಿ ಮತ್ತು ಮಗನನ್ನು ನೋಡಿ ಡಿ ಬಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ…?
ಹೆಂಡತಿ ಮತ್ತು ಮಗನನ್ನು ನೋಡಿ ದರ್ಶನ್ ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ...?
Vijayalakashmi And Vineesh Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ನ ಆದೇಶದಂತೆ ಸದ್ಯ ದರ್ಶನ್ ಹಾಗು ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ 17 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೋಪದ ಕೈಗೆ ಬುದ್ದಿ ಕೊಟ್ಟು ತಾವು ಮಾಡಿದ ಕೆಲಸಕ್ಕೆ ದರ್ಶನ್ ಹಾಗೂ ಪವಿತ್ರ ಗೌಡ ಪಶ್ಚತ್ತಾಪ ಪಡುತ್ತಿದ್ದಾರೆ. ತಾವಿದ್ದ ಪರಿಸ್ಥಿತಿಯನ್ನು ನೆನೆಸಿಕೊಂಡು ಕಣ್ಣೀರಿಡುತ್ತಿದ್ದಾರೆ. ಇನ್ನು ನಟ ದರ್ಶನ್ ಅವರ ಭೇಟಿಗೆ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ತಮ್ಮ ಪತ್ನಿ ಹಾಗೂ ಮಗನನ್ನು ಭೇಟಿ ಮಾಡಿದ ಬಳಿಕ ನಟ ದರ್ಶನ್ ಕಣ್ಣೀರಿಟ್ಟಿದ್ದಾರೆ ಎನ್ನುವ ಬಗೆ ಮಾಹಿತಿ ಲಭಿಸಿದೆ.
![Vijayalakshmi And Vineesh Darshan](https://nadunudi.in/wp-content/uploads/2024/06/Vijayalakshmi-And-Vineesh-Darshan.png)
ಹೆಂಡತಿ ಮತ್ತು ಮಗನನ್ನು ನೋಡಿ ಡಿ ಬಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ…?
ಬೆಂಗಳೂರು ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು. ಈ ವೇಳೆ ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ ಪತಿಗೆ ಸಾಂತ್ವನ ಹೇಳಿದರು. ಆದರೆ ದರ್ಶನ್ ತನ್ನ ಮಗ ಮತ್ತು ಹೆಂಡತಿಯ ಮುಖವನ್ನು ನೋಡಿದಾಗ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಆಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಂತ್ವನ ಹೇಳಿದ್ದಾರೆ ಎನ್ನಲಾಗಿದೆ.
ಸದ್ಯ ದರ್ಶನ್ ಜೈಲಿನಲ್ಲಿ ಪರಿತಪಿಸುತ್ತಿದ್ದಾರೆ. ಮಗ ಮತ್ತು ಹೆಂಡಿತಿಯನ್ನು ಕಂಡ ದರ್ಶನ್ ಭಾವುಕರಾಗಿದ್ದಾರೆ. ದರ್ಶನ್ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಕೂಡ ಕಣ್ಣೀರಿಟ್ಟಿದ್ದಾರೆ. ಕೊಲೆ ಆರೋಪದಡಿ ಬಂಧಿತರಾಗಿರುವ ಪತಿ ದರ್ಶನ್ ಅವರನ್ನು ರಕ್ಷಿಸಲು ವಿಜಯಲಕ್ಷ್ಮಿ ಕೂಡ ಕಾನೂನು ಹೋರಾಟ ಆರಂಭಿಸಿದ್ದಾರೆ. ಜುಲೈ 4 ರ ವರಿಗೆ ದರ್ಶನ್ ನ್ಯಾಯಾಂಗ ಬಂದನದಲ್ಲಿರುವಂತೆ ಕೋರ್ಟ್ ಆದೇಶಿಸಿದೆ. ಪತಿಯನ್ನು ಜೈಲಿನಿಂದ ಹೊರ ತರುವ ಪ್ರಯತ್ನದಲ್ಲಿ ವಿಜಯಲಕ್ಷ್ಮಿ ಹೋರಾಡುತ್ತಿದ್ದಾರೆ.
![Vijayalakshmi and Vinish to meet Darshan in jail](https://nadunudi.in/wp-content/uploads/2024/06/Vijayalakshmi-and-Vinish-to-meet-Darshan-in-jail.png)
ದರ್ಶನ್ ಭೇಟಿಗೆ ಆಗಮಿಸಿದ ವಿನೋದ್ ಪ್ರಭಾಕರ್
ಇನ್ನು ದರ್ಶನ್ ಅವರನ್ನು ನೋಡಲು ದರ್ಶನ್ ಅವರ ಆಪ್ತ ಸ್ನೇಹಿತ, ಕನ್ನಡ ಖ್ಯಾತ ನಟ ವಿನೋದ್ ಪ್ರಭಾಕರ್ ಕೂಡ ಆಗಮಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಸಮಯದಿಂದ ದರ್ಶನ್ ಆಪ್ತರು ಯಾರು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲಿರಲಿಲ್ಲ. ಹಾಗೆಯೆ ಯಾವುದೇ ನಟರು ದರ್ಶನ್ ಸಹಾಯಕ್ಕೆ ಬಂದಿರಲಿಲ್ಲ. ಆದರೆ ಸದ್ಯ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದ ಸಮಯದಲ್ಲಿ ವಿನೋದ್ ಪ್ರಭಾಕರ್ ದರ್ಶನ್ ಭೇಟಿಗೆ ಆಗಮಿಸಿದ್ದಾರೆ. ಈ ವೇಳೆ ದರ್ಶನ್ ಪ್ರಕರಣದ ಬಗ್ಗೆ ವಿನೋದ್ ಪ್ರಭಾಕರ್ ಮೌನ ಮುರಿದಿದ್ದಾರೆ.
![vinod prabhakar to meet darshan in jail](https://nadunudi.in/wp-content/uploads/2024/06/vinod-prabhakar-to-meet-darshan-in-jail.png)